Welcome To Always Lucky

View life as a continuous learning experience.

Friday, April 22, 2016

ಮೊಗ್ಗಿನ ಮನಸ್ಸು - ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ

ಚಿತ್ರ: ಮೊಗ್ಗಿನ ಮನಸ್ಸು
ಗಾಯನ: ಸೋನು ನಿಗಮ್
ನಟರು: ಯಶ್, ರಾಧಿಕ ಪಂಡಿತ್

i love you......ಓ....
i love you......

ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು....

ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......

ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗು ಕಾಯುವೆನು.....

ಮಾನಸ ಸರೋವರ - ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು

ಚಿತ್ರ: ಮಾನಸ ಸರೋವರ 
ಹಾಡಿದವರು: ಪಿ ಬಿ ಶ್ರೀನಿವಾಸ್ 
ನಟರು: ಶ್ರೀನಾಥ್, ಪದ್ಮ ವಾಸಂತಿ, ರಾಮಕೃಷ್ಣ 

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು 
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು 

ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ 
ಕವಿಯೊಬ್ಬ ಕನವರಿಸಿದನು, ಹೂ ಇವಳೆ ಚೆಲುವೆ ಚೆಲುವೆ 
ಇವಳ ಜೊತೆಯಲ್ಲಿ ನಾ ಸ್ವರ್ಗವನೇ ಗೆಲ್ಲುವೆ 
ನಾ ಸ್ವರ್ಗವನೇ ಗೆಲ್ಲುವೆ 

ವೇದಾಂತಿ ಹೇಳಿದನು......

ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ 
ಕವಿ ನಿಂತು ಸಾರಿದನು, ಓ ಇದು ಅಲ್ಲ ಶೂನ್ಯ 
ಜನ್ಮ ಜನ್ಮದಿ ಸವಿದೆ ನಾನೆಷ್ಟು ಧನ್ಯ ಧನ್ಯ 
ನಾನೆಷ್ಟು ಧನ್ಯ ಧನ್ಯ 

ವೇದಾಂತಿ ಹೇಳಿದನು.....

ಅಮೃತ ವರ್ಷಿಣಿ-ತುಂತುರು ಅಲ್ಲಿ ನೀರ ಹಾಡು

ಚಿತ್ರ: ಅಮೃತ ವರ್ಷಿಣಿ
ಗಾಯಕಿ: ಕೆ ಎಸ್ ಚಿತ್ರ
ನಟರು: ಸುಹಾಸಿನಿ, ರಮೇಶ್, ಶರತ್ ಬಾಬು

ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು

ಗಗನದ ಸೂರ್ಯ ಮನೆ ಮೇಲೆ
ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ
ನಿನ್ನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ
ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ
ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ
ಅಲ್ಲಿ ನನ್ನ ಇಂಚರ ಅಮರ

ಚೆಲುವನೆ ನಿನ್ನ ಮುಗುಳು ನಗೆ
ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ
ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲ ನೀನೆ
ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ
ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮಕೆ
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ

ಅಮೃತ ವರ್ಷಿಣಿ - ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ

 

ಚಿತ್ರ: ಅಮೃತ ವರ್ಷಿಣಿ  
ಗಾಯಕ: ಎಸ್ ಪಿ ಬಾಲು  
ನಟರು: ಸುಹಾಸಿನಿ, ರಮೇಶ್, ಶರತ್ ಬಾಬು  

ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ  
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ  

ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ  
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ  
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ     
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ  
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಕ್ಷಮಿಸೆ......

ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈ ಗೊಂಬೆಯಾದೆ  
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಹರಿಸೆ.....

Modala maleyanthe

Modala maleyanthe
Yedege ilide mellage
Modala kanasanthe
Olave olide ommege

Chaachida kaige aakashave thaagide
Geechida haage malebille maigantide
Hosa samvatsara hosa manvantara
Shuruvaagide aagide eege

Modala maleyanthe
Yedege ilide mellage

Voho..............

Nee nanage siguva munna
Ellellu baride mouna
Koti koti swara
Omme chimmo thara
Bande nee hathira
Ninthe baanethara

Kanmucchi kanbittare O..
Badalaagide ee dhare
Hosa samvatsara hosa manvantara
Shuruvaagide aagide eega

Ondondu khushigoo indu
Naaniduva hesarenindu
Nanna ekaanthake anthya nee haadide
Sundara swargake nanna nee doodide

Kanmunde neeniddare O..
Eee lokake naa dore
Hosa samvatsara hosa manvantara
Shuruvaagide aagide eega

Hmm.......

ಈ ಭೂಮಿ ಬಣ್ಣದ ಬುಗುರಿ

ಒಹೋ ಓಹೋ 
ಭೂಮಿ ಬಣ್ಣದ ಬುಗುರಿ
ಶಿವನೇ ಚಾಟಿ ಕಣೋ
ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ

ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ

ಭೂಮಿ ಬಣ್ಣದ ಬುಗುರಿ
ಶಿವನೇ ಚಾಟಿ ಕಣೋ
ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ

ಮರಿಬೇಡ ತಾಯಿಯ ಋಣವ
ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೋ
ಸುಖವಾದ ಬಾಷೆಯ ಕಲಿಸೊ
ಸರಿಯಾದ ದಾರಿಗೆ ನೆಡೆಸೊ
ಸಂಸ್ಕೃತಿಯೇ ಗುರುವು ಕಣೋ

ಮರೆತಾಗ ಜೀವನ ಪಾಠ
ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ

ಭೂಮಿ ಬಣ್ಣದ ಬುಗುರಿ
ಶಿವನೇ ಚಾಟಿ ಕಣೋ
ಬಾಳು ಸುಂದರ ನಗರಿ
ನೀನಿದರ ಮೇಟಿ ಕಣೋ

ಮರಿಬೇಡ ಮಗುವಿನ ನಗುವ
ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೇ

ಕಳಬೇಡ ಕೊಲ್ಲಲು ಬೇಡ
ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ

ನಿಂತಾಗ ಬುಗುರಿಯ ಆಟ
ಎಲ್ಲಾರು ಒಂದೆ ಓಟ
ಕಾಲ ಕ್ಷಣಿಕ ಕಣೋ

ಭೂಮಿ ಬಣ್ಣದ ಬುಗುರಿ
ಶಿವನೇ ಚಾಟಿ ಕಣೋ

ಬಾಳು ಸುಂದರ ನಗರಿ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು 

ಹೇಹೆ ಹೇ.. ಓಹೊ ಹೋ
ಹಾ ಹಾ ಹಾ .. 

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು 
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು 
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನ ಸಾಗದು, ಜೀವನ ಸಾಗದು 
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು .. 

ಸೂರ್ಯ ಬರದೆ ಕಮಲವೆಂದು ಅರಳದು 
ಚಂದ್ರನಿರದೆ ತಾರೆಯೆಂದು ನಲಿಯದು 
ಸೂರ್ಯ ಬರದೆ ಕಮಲವೆಂದು ಅರಳದು 
ಚಂದ್ರನಿರದೆ ತಾರೆಯೆಂದು ನಲಿಯದು 
ಒಲವು ಮೂಡದಿರಲು ಮನವು ಅರಳದು 
ಮನವು ಅರಳದಿರಲು ಗೆಲುವು ಕಾಣದು 
ಮನವು ಅರಳದಿರಲು ಗೆಲುವು ಕಾಣದು 

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು 
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು 
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನ ಸಾಗದು, ಜೀವನ ಸಾಗದು 
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು .. 

ಲೋಕದಲ್ಲಿ ಗಂಡು ಹೆಣ್ಣಿಗಾಸರೆ 
ಆದರಿಲ್ಲಿ ನಾನು ನಿನ್ನ ಕೈಸೆರೆ 
ಲೋಕದಲ್ಲಿ ಗಂಡು ಹೆಣ್ಣಿಗಾಸರೆ 
ಆದರಿಲ್ಲಿ ನಾನು ನಿನ್ನ ಕೈಸೆರೆ 
ಕೂಡಿ ನಲಿವ ಆಸೆ ಮನದಿ ಕಾದಿದೆ 
ಹಿತವು ಎಲ್ಲಿ ನಾವು ಬೇರೆಯಾದರೆ
ಹಿತವು ಎಲ್ಲಿ ನಾವು ಬೇರೆಯಾದರೆ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು 
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು 
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನ ಸಾಗದು, ಪಾವನ ಆಗದು 
ಆಹಹ ಆಹಹ.. ಮ್ ಮ್ .. 

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು .. 

ಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆ

ಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆ 
ಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆ 
ತಂತಿ ಹರಿದ ವೀಣೆ ಇಂದ ನಾದ ಹರಿಯ ಬಲ್ಲದೆ 
ಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲ 
ಉಲ್ಲಾಸ ಇನ್ನೆಲ್ಲಿದೆ ...
ಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆ ...
ಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆ 
ಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆ 
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ?
ತಂತಿ ಹರಿದ ವೀಣೆ ಇಂದ ನಾದ ಹರಿಯ ಬಲ್ಲದೆ 
ಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲ 
ಉಲ್ಲಾಸ ಇನ್ನೆಲ್ಲಿದೆ ...
ಬಾಡಿ ಹೋದ ಬಳ್ಳಿ ಇಂದ ಹೂವು ಅರಳ ಬಲ್ಲದೆ ...
ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ?
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ
ನಡೆಸುವಾತ ಬೇರೆ... ಅವನ ಇಚ್ಛೆ ಯಾರು ಬಲ್ಲರು?


ತೆರೆದಿದೆ ಮನೆ ಓ ಬಾ ಅತಿಥಿ

.. ... ... ... 
ತೆರೆದಿದೆ ಮನೆ ಬಾ ಅತಿಥಿ
... ... ...
ತೆರೆದಿದೆ ಮನೆ ... ಬಾ ಅತಿಥಿ
ತೆರೆದಿದೆ ಮನೆ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ
ತೆರೆದಿದೆ ಮನೆ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ

ಆವ ರೂಪದೊಳು ಬಂದರು ಸರಿಯೇ 
ಆವ ವೇಶದೊಳು ನಿಂದರು ಸರಿಯೇ 
ಆವ ರೂಪದೊಳು ಬಂದರು ಸರಿಯೇ 
ಆವ ವೇಶದೊಳು ನಿಂದರು ಸರಿಯೇ 
ನೇಸರು ದಯದೊಳು ಬಹೆಯ ಬಾ 
ತಿಂಗಳಂದದಲಿ ಬಹೆಯ ಬಾ.. 
ತೆರೆದಿದೆ ಮನೆ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ

ಇನ್ತಾದರು ಬಾ ಅಂತಾದರೂ ಬಾ 
ಎಂತಾದರು ಬಾ ಬಾ ಬಾ 
ಇನ್ತಾದರು ಬಾ ಅಂತಾದರೂ ಬಾ 
ಎಂತಾದರು ಬಾ ಬಾ ಬಾ 
ಬೇಸರವಿದನು ಸರಿಸುವ ಹೊಸ ಬಾಳ 
ಉಸಿರಾಗಿ ಬಾ ಬಾ ಬಾ .. 
ತೆರೆದಿದೆ ಮನೆ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ

ಕಡಲಾಗಿ ಬಾ.. ಬಾನಾಗಿ ಬಾ.. 
ಗಿರಿಯಾಗಿ ಬಾ.. ಕಾನಾಗಿ ಬಾ..
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ .. ಬಾ .. 
ಹೊಸ ತಾನದ.. ಹೊಸ ಗಾನದ
ಹೊಸ ತಾನದ.. ಹೊಸ ಗಾನದ
ರಸ ಜೀವವ ತಾ ತಾ ತಾ 

ತೆರೆದಿದೆ ಮನೆ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ ಅತಿಥಿ

ಹೊಸ ಬಾಳನು ತಾ... ಅತಿಥಿ...

Wednesday, April 13, 2016

muddina hudugi chanda - raayaru bandaru maavana manege

ಚಿತ್ರ: ರಾಯರು ಬಂದರು ಮಾವನ ಮನೆಗೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜ್ ಕೋಟಿ
ಗಾಯನ: ಎಸ್. ಪಿ. ಬಾಲಸುಭ್ರಮಣ್ಯಂ
ನಟರು: ಡಾ ವಿಷ್ಣು ವರ್ಧನ್, ದಾಳಿ, ಬಿಂದಿಯ

ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಓ ಚಿನ್ನ ಅಂದು ನೋಡಿದೆ ನಿನ್ನನು
ಓ ರನ್ನ ಸೆರೆ ಮಾಡಿದೆ ನನ್ನನು
ಅರಿಯದೆ ಹೇಗೊ ನಾ ಬೆರೆತೆ ನಿನ್ನಲಿ
ತನು ಮನವೆಲ್ಲ ತುಂಬಿ ನಿಂತೆ ನನ್ನಲಿ
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ

ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಯಾವುದೋ ಜನುಮಾಂತರ ಬಂಧನ,
ಬೆರೆಸಿತು ಅದು ನಮ್ಮನು ಆ ದಿನ
ತಾಳದು ಜೀವ ನೀ ನಿಮಿಷ ನೊಂದರು,
ಒಂದೆ ಒಂದು ಹನಿಯ ಕಣ್ಣೀರು ಬಂದರು,
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಮುದ್ದಿನ ಹುಡುಗ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ