SHOP HERE

Welcome To Always Lucky

View life as a continuous learning experience.

Friday, April 22, 2016

ಮಾನಸ ಸರೋವರ - ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು

ಚಿತ್ರ: ಮಾನಸ ಸರೋವರ 
ಹಾಡಿದವರು: ಪಿ ಬಿ ಶ್ರೀನಿವಾಸ್ 
ನಟರು: ಶ್ರೀನಾಥ್, ಪದ್ಮ ವಾಸಂತಿ, ರಾಮಕೃಷ್ಣ 

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು 
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು 

ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ 
ಕವಿಯೊಬ್ಬ ಕನವರಿಸಿದನು, ಹೂ ಇವಳೆ ಚೆಲುವೆ ಚೆಲುವೆ 
ಇವಳ ಜೊತೆಯಲ್ಲಿ ನಾ ಸ್ವರ್ಗವನೇ ಗೆಲ್ಲುವೆ 
ನಾ ಸ್ವರ್ಗವನೇ ಗೆಲ್ಲುವೆ 

ವೇದಾಂತಿ ಹೇಳಿದನು......

ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ 
ಕವಿ ನಿಂತು ಸಾರಿದನು, ಓ ಇದು ಅಲ್ಲ ಶೂನ್ಯ 
ಜನ್ಮ ಜನ್ಮದಿ ಸವಿದೆ ನಾನೆಷ್ಟು ಧನ್ಯ ಧನ್ಯ 
ನಾನೆಷ್ಟು ಧನ್ಯ ಧನ್ಯ 

ವೇದಾಂತಿ ಹೇಳಿದನು.....

No comments:

Post a Comment