Welcome To Always Lucky

View life as a continuous learning experience.

Sunday, April 24, 2016

Ne saniyake bandare rudyada gathi yenu

ನೀ ಸನಿಹಕೆ ಬಂದರೆ ಹೃದಯದ ಗತಿ ಏನು?
ಹೇಳು ನೀನು, ನೀನೆ ಹೇಳು.
ಇನ್ನೂ ನಿನ್ನ, ಕನಸಿನಲ್ಲಿ ಕರೆ ನೀನು ಶುರು ನಾನು.
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ,
ಏನು? ಹೇಳು, ಹೇಳು ನೀನು.
ಸಮೀಪ ಬಂತು ಬಯಕೆಗಳ, ವಿಶೇಷವಾದ ಮೆರವಣಿಗೆ.
ಇದೀಗ ನೋಡು ಬೆರಳುಗಳ, ಸರಾಗವಾದ ಬರವಣಿಗೆ.
ನಿನ್ನಾ ಬಿಟ್ಟು ಇಲ್ಲಾ ಜೀವ, ಎಂದೂ ಕೂಡ ಒಂದು ಗಳಿಗೆ.
ನಿನ್ನಾ ಮಾತು ಏನೇ ಇರಲಿ, ನಿನ್ನಾ ಮೌನ ನಂದೇ ಏನು?
ನೀ ಸನಿಹಕೆ ಬಂದರೆ ಹೃದಯದ ಗತಿ ಏನು?
ಹೇಳು ನೀನು. ನೀನೆ ಹೇಳು.
ನನ್ನಾ ಎದೆಯ, ಸಣ್ಣಾ ತೆರೆಯ, ಧಾರಾವಾಹಿ ನಿನ್ನಾ ನೆನಪು.
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು.
ಉಸಿರು ಹಾರಿ ಹೋಗುವಹಾಗೆ,
ಬಿಗಿದು ತಬ್ಬಿಕೊಳ್ಳೋ ನೀನು.
ಮತ್ತೆ ಮತ್ತೆ ನಿನ್ನುಸಿರು ನೀಡುತಾ ಉಳಿಸು ನನ್ನನು.
ದಾರಿಯಲ್ಲಿ, ಬುತ್ತಿ ಹಿಡಿದು
ನಿಂತ ಸಾಥಿ ನೀನೆ ಏನು?
ನೀ ಸನಿಹಕೆ ಬಂದರೆ ಹೃದಯದ ಗತಿ ಏನು?
ಹೇಳು ನೀನು. ನೀನೆ ಹೇಳು.
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ,
ಏನು? ಹೇಳು, ಹೇಳು ನೀನು.

jenina holiyayoo halina maleyoo

ಜೇನಿನ ಹೊಳೆಯೊ ಹಾಲಿನ ಮಳೆಯೊ 
ಸುಧೆಯೊ ಕನ್ನಡ ಸವಿ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ 
ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರ ಮಾಧುರ್ಯವೊ 
ಸುಮಧುರ ಸುಂದರ ನುಡಿಯೊ ... ಆಹ 
ಜೇನಿನ ಹೊಳೆಯೊ ಹಾಲಿನ ಮಳೆಯೊ 
ಸುಧೆಯೊ ಕನ್ನಡ ಸವಿ ನುಡಿಯೊ
ಕವಿ ನುಡಿ ಕೋಗಿಲೆ ಹಾಡಿದ ಹಾಗೆ 
( ... ರಿ ರಿ ... )
( ರಿ )
ಸವಿ ನುಡಿ ತಣ್ಣನೆ ಗಾಳಿಯ ಹಾಗೆ 
ಕವಿ ನುಡಿ ಕೋಗಿಲೆ ಹಾಡಿದ ಹಾಗೆ 
ಸವಿ ನುಡಿ ತಣ್ಣನೆ ಗಾಳಿಯ ಹಾಗೆ 
ಒಲವಿನ ಮಾತುಗಳಾಡುತಲಿರಲು 
ಮಲ್ಲಿಗೆ ಹೂಗಳು ಅರಳಿದ ಹಾಗೆ 
ಮಕ್ಕಳು ನುಡಿದರೆ ಸಕ್ಕರೆಯಂತೆ 
ಅಕ್ಕರೆ ನುಡಿಗಳು ಮುತ್ತುಗಳಂತೆ 
ಪ್ರೀತಿಯ ನೀತಿಯ ಮಾತುಗಳೆಲ್ಲ 
ಸುಮಧುರ ಸುಂದರ ನುಡಿಯೊ ... ಆಹ
ಜೇನಿನ ಹೊಳೆಯೊ ಹಾಲಿನ ಮಳೆಯೊ 
ಸುಧೆಯೊ ಕನ್ನಡ ಸವಿ ನುಡಿಯೊ
ಆಹಾಹ ...
ಕುಮಾರ ವ್ಯಾಸನ ಕಾವ್ಯದ ಚಂದ 
ಕವಿ ಸರ್ವಜ್ಞನ ಪದಗಳ ಅಂದ 
ಕುಮಾರ ವ್ಯಾಸನ ಕಾವ್ಯದ ಚಂದ 
ಕವಿ ಸರ್ವಜ್ಞನ ಪದಗಳ ಅಂದ 
ದಾಸರು ಶರಣರು ನಾಡಿಗೆ ನೀಡಿದ 
ಭಕ್ತಿಯ ಗೀತೆಗಳ ಪರಮಾನಂದ 
ರನ್ನನು ರಚಿಸಿದ ಹೊನ್ನಿನ ನುಡಿಯು 
ಪಂಪನು ಹಾಡಿದ ಚಿನ್ನದ ನುಡಿಯು 
ಕನ್ನಡ ತಾಯಿಯು ನೀಡಿದ ವರವು 
ಸುಮಧುರ ಸುಂದರ ನುಡಿಯೊ ... ಆಹ
ಜೇನಿನ ಹೊಳೆಯೊ ಹಾಲಿನ ಮಳೆಯೊ 
ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರ ಮಾಧುರ್ಯವೊ 
ಸುಮಧುರ ಸುಂದರ ನುಡಿಯೊ ... ಆಹ 
ಜೇನಿನ ಹೊಳೆಯೊ ಹಾಲಿನ ಮಳೆಯೊ 
ಸುಧೆಯೊ ಕನ್ನಡ ಸವಿ ನುಡಿಯೊ

ಸುಧೆಯೊ ಕನ್ನಡ ಸವಿ ನುಡಿಯೊ ...

ನನ್ನ ಜೀವ ನೀನು (ನೀನು .. ನೀನು ..)

.. .. .. 
ನನ್ನ ಜೀವ ನೀನು (ನೀನು .. ನೀನು ..)
ನನ್ನ ಬಾಳ ಜ್ಯೋತಿ ನೀನು (ನೀನು .. ನೀನು ..)

ನನ್ನ ಜೀವ ನೀನು 
ನನ್ನ ಬಾಳ ಜ್ಯೋತಿ ನೀನು 
ನಿನ್ನ ಕಣ್ಣ ಕಂಬನಿ 
ನನ್ನಾಣೆ ನೋಡಲಾರೆನು 
ನನ್ನ ಜೀವ ನೀನು 
ನನ್ನ ಬಾಳ ಜ್ಯೋತಿ ನೀನು 

ಬಾಡಿ ಹೋದ ಹೂವಿನಂತೆ
ಏಕೆ ಹೀಗೆ ಕಾಣುವೆ .. 
ಬಾಡಿ ಹೋದ ಹೂವಿನಂತೆ
ಏಕೆ ಹೀಗೆ ಕಾಣುವೆ 
ನೋಡುವ.. .. ಆಸೆಗೆ
ನೋಡುವ.. ಆಸೆಗೆ
ನಿನ್ನ ಕಣ್ಗಳಾಗುವೆ 
ಹರುಷ ತುಂಬಿ ನಗಿಸುವೆ .. 
ನನ್ನ ಜೀವ ನೀನು 
ನನ್ನ ಬಾಳ ಜ್ಯೋತಿ ನೀನು 
ನಿನ್ನ ಕಣ್ಣ ಕಂಬನಿ 
ನನ್ನಾಣೆ ನೋಡಲಾರೆನು 
ನನ್ನ ಜೀವ ನೀನು 
ನನ್ನ ಬಾಳ ಜ್ಯೋತಿ ನೀನು 

ಯಾರ ಶಾಪ ಬಂದಿತೋ.. 
ಯಾರ ಶಾಪ ಬಂದಿತೋ.. 
ಯಾರ ಕೋಪ ಸೋಕಿತೊ.. 
ನಿನ್ನನು.. ನಾನಿಂದು ನಿನ್ನನು.. 
ನೋಡೋ ಆಸೆ ಮಾಡೋದೇನು 
ಚಿಂತೆ ಏಕೆ ನಾನಿಲ್ಲವೇ .. 
ನನ್ನ ಜೀವ ನೀನು 
ನನ್ನ ಬಾಳ ಜ್ಯೋತಿ ನೀನು 
ನಿನ್ನ ಕಣ್ಣ ಕಂಬನಿ 
ನನ್ನಾಣೆ ನೋಡಲಾರೆನು 
ನನ್ನ ಜೀವ ನೀನು 
ನನ್ನ ಬಾಳ ಜ್ಯೋತಿ ನೀನು 


ನಗುವ ನಯನ ಮಧುರ ಮೌನ

... 
hmmm ... ಆಹಾ .. .. 
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ಹೊಸ ಭಾಷೆಯಿದು, ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ
ನಗುವ ನಯನ, ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ

ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ನಿನ್ನನು
ಇರುಳಲ್ಲು ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೆ ಕೈಯ್ಯನು
ಗೆಳೆಯ ಜೊತೆಗೆ ಹಾರಿ ಬರುವೆ
ಬಾನ ಎಲ್ಲೆ ದಾಟಿ ನಲಿವೆ
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ

ರಾತ್ರಿ ಹಾಡೋ ಪಿಸುಮಾತಲಿ
ನಾ ಕಂಡೆ ಇನಿದಾದ ಸವಿ ರಾಗವ
ನೀನಲ್ಲಿ ನಾನಿಲ್ಲಿ ಏಕಾಂತದಿ
ನಾ ಕಂಡೆ ನನ್ನದೇ ಹೊಸ ಲೋಕವ
ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ.

ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ಹೊಸ ಭಾಷೆಯಿದು ರಸ ಕಾವ್ಯವಿದು

ಇದ ಹಾಡಲು ಕವಿ ಬೇಕೇ

ಢವ ಢವ ನಡುಕವ 

ಢವ ಢವ ನಡುಕವ 
ಬಿಡು ನೀ ನಲ್ಲೆ 
ಇರುವೆ ಇಲ್ಲೇ 
ಏಕೆ ಅಂಜಿಕೆ ..
ಢವ ಢವ ನಡುಕವ .. 

ರೋಜಾ ಹೂವಿನಂತ
ತುಟಿ ಇಂದು ಬೆದರಿ ಒಣಗಿದೆ 
ನಾಚಿ ಅದರ ಕೆನ್ನೆ 
ಏಕೆ ಇಂದು ಬಾಡಿ ಹೋಗಿದೆ 
ಕಣ್ಣಿನ ಹನಿಗಳ 
ಮಣ್ಣಿಗೆ ಚೆಲ್ಲದೆ 
ಬಾರೆ ನೀ ಬಾಚಿಕೊ
ಹೆದರಿಕೆ ಏತಕೆ?

ಉಹು ಹೆದರಬೇಡ 
ಎಂದು ನಾವು ಬೇರೆಯಾಗೆವು 
ಊಹು ಭಯವು ಬೇಡ 
ನಿನ್ನ ಬಿಟ್ಟು ದೂರ ಹೋಗೆನು 
ನಿನಗೆ ನಾ ಬೇಲಿಯು
ಹಾಡುವೆ ಲಾಲಿಯು 
ಹಾಯಾಗಿ ಮಲಗಿಕೊ 

ಢವ ಢವ ನಡುಕವ 
ಬಿಡು ನೀ ನಲ್ಲೆ 
ಇರುವೆ ಇಲ್ಲೇ 
ಏಕೆ ಅಂಜಿಕೆ ..
ಮಲಗಿಕೊ ಮಲಗಿಕೊ 
hmmm... hmmm... 
ಆಹಾಹಹ... ಆಹಾಹಹ... 

ಲಲಲಲ.. hmmm... 

ಕರುನಾಡ ತಾಯಿ ಸದಾ ಚಿನ್ಮಯಿ 

...  
ಕರುನಾಡ ತಾಯಿ ಸದಾ ಚಿನ್ಮಯಿ 
ಕರುನಾಡ ತಾಯಿ ಸದಾ ಚಿನ್ಮಯಿ 
ಪುಣ್ಯ ಭೂಮಿ ನಮ್ಮ ದೇವಾಲಯ 
ಪ್ರೇಮಾಲಯ ದೇವಾಲಯ 
ಕರುನಾಡ ತಾಯಿ ಸದಾ ಚಿನ್ಮಯಿ 
ಕರುನಾಡ ತಾಯಿ ಸದಾ ಚಿನ್ಮಯಿ 

ವೀರ ಧೀರರಾಳಿದ ನಾಡು ನಿನ್ನದು 
ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು 
ವರ ಸಾಧು ಸಂತರ ನೆಲೆ ನಿನ್ನದು 
ಮಹಾ ಶಿಲ್ಪಕಾರರ ಕಲೆ ನಿನ್ನದು 
ಸಂಗೀತ ಸಾಹಿತ್ಯ ಸೆಲೆ ನಿನ್ನದು 

ಕರುನಾಡ ತಾಯಿ ಸದಾ ಚಿನ್ಮಯಿ 
ಕರುನಾಡ ತಾಯಿ ಸದಾ ಚಿನ್ಮಯಿ 
ಪುಣ್ಯ ಭೂಮಿ ನಮ್ಮ ದೇವಾಲಯ 
ಪ್ರೇಮಾಲಯ ದೇವಾಲಯ 
ಕರುನಾಡ ತಾಯಿ ಸದಾ ಚಿನ್ಮಯಿ 
ಕರುನಾಡ ತಾಯಿ ಸದಾ ಚಿನ್ಮಯಿ 

ಜೀವ ತಂತಿ ಮೀಟುವ ಸ್ನೇಹ ನಮ್ಮದು 
ಎಲ್ಲ ಒಂದೇ ಅನ್ನುವ ಔದಾರ್ಯ ನಮ್ಮದು 
ಸೌಂದರ್ಯ ಸೀಮೆಯ ಗುಡಿ ನಮ್ಮದು
ಮಾಧುರ್ಯ ತುಂಬಿದ ನುಡಿ ನಮ್ಮದು 
ಕಸ್ತೂರಿ ಕನ್ನಡದ ಸವಿ ನಮ್ಮದು 
ರೋಮ ರೋಮಗಳು ನಿಂತವು ತಾಯೆ 
ಚೆಲುವ ಕನ್ನಡದೊಳೇನಿದು ಮಾಯೆ 
ಮುಗಿಲೇ ಕಡಲೆ ಸಿಡಿಲೆ ಕೇಳಿರಿ 
ಮುಗಿಲೇ ಕಡಲೆ ಸಿಡಿಲೆ ಕೇಳಿರಿ 
ತನುವು ಮನವು ಧನವು ಎಲ್ಲ ಕನ್ನಡ 
ತನುವು ಮನವು ಧನವು ಎಲ್ಲ ಕನ್ನಡ 
.. .. 

ಕರುನಾಡ ತಾಯಿ ಸದಾ ಚಿನ್ಮಯಿ 
ಕರುನಾಡ ತಾಯಿ ಸದಾ ಚಿನ್ಮಯಿ 
ಪುಣ್ಯ ಭೂಮಿ ನಮ್ಮ ದೇವಾಲಯ 
ಪ್ರೇಮಾಲಯ ದೇವಾಲಯ 
ಕರುನಾಡ ತಾಯಿ ಸದಾ ಚಿನ್ಮಯಿ 
ಕರುನಾಡ ತಾಯಿ ಸದಾ ಚಿನ್ಮಯಿ 


Friday, April 22, 2016

ಮುಂಗಾರು ಮಳೆ - ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಚಿತ್ರ: ಮುಂಗಾರು ಮಳೆ
ಹಾಡಿದವರು: ಸೋನು ನಿಗಮ್
ನಟರು: ಗಣೇಶ್, ಪೂಜಾ ಗಾಂಧಿ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ ತಿಳಿಯದಾಗಿದೆ

ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮನಾದವೋ
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು ಏನು ಮೋಡಿಯೋ

ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರು

ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ   

ಗೀತ- ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ

ಚಿತ್ರ: ಗೀತ
ಹಾಡಿದವರು: ಎಸ್ ಪಿ ಬಾಲು 
ನಟರು: ಶಂಕರ್ ನಾಗ್ 

ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ 
ಒಂದು ಹೆಣ್ಣಿನ... ಓ..... ನೊಂದ ವಿರಹ ಗೀತೆ

ಸಂಪಿಗೆ ಒಂದೂರು ಮಲ್ಲಿಗೆ ಒಂದೂರು, ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು, ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ, ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ

ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ 
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ 
ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ........

ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ 
ಹಲ್ಲನ್ನು ಮಸೆದ ಸೇತುವೆಯ ಕಡಿದ
ಆ ಜೋಡಿಯ ಕತೆಯಂದಿಗೆ ಕೊನೆಯಾಯಿತು ಹೀಗೆ........

ಮನಸಾರೆ -ನಾ ನಗುವ ಮೊದಲೆನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ

ಚಿತ್ರ: ಮನಸಾರೆ
ಹಾಡಿದವರು: ಶ್ರೇಯ ಗೋಶಲ್ 
ನಟರು: ದಿಗಂತ್, ಐನ್ದ್ರಿತ

ನಾ ನಗುವ ಮೊದಲೆನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೆನೆ ತೊದಲುತಿದೆ ಹೃದಯವಿದು ಒಳಗೊಳಗೇ
ನಾ ನಡೆವ ಮೊದಲೆನೆ ಎಳೆಯುತಿದೆ ದಾರಿಯಿದು ನಿನ್ನೆಡೆಗೆ
ನಾ ಅರಿವ ಮೊದಲೆನೆ ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀನನಗೆ?

ತಿಳಿಸದೇ ನನಗೆ ಹುಡುಕಿವೆ ನಿನ್ನ ನನ್ನಯ ಕಣ್ಣು
ಈ ಸಂಕಟ ಸಾಕಾಗಿದೆ ಮುಂದೇನು
ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು
ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀನನಗೆ?

ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ
ನನಗೇತಕೆ ನನ್ನ ಮೇಲೆಯೇ ಈ ಸಂಶಯ
ಬರಿ ಕನಸಿನಲೇ ಆಗುವೆ ಏಕೆ ನನ್ನಯ ಇನಿಯ
ಹೇಳು ಒಮ್ಮೆ ಹೇಳು ಇದುವೇ ಪ್ರೀತಿಯೆಂದು ನೀನನಗೆ

ನಾ ನಗುವ ಮೊದಲೆನೆ.........